ಆಜ್ಞಾವಿಧಿಗಳು ಮತ್ತು ಘೋಷಣೆಗಳು
ಪವಿತ್ರಾಲಯದ ಶಿಫಾರಸು ಸಂದರ್ಶನಗಳು


ಪವಿತ್ರಾಲಯದ ಶಿಫಾರಸು ಸಂದರ್ಶನಗಳು

ಪವಿತ್ರಾಲಯವು ಕರ್ತನ ಆಲಯವಾಗಿದೆ. ಪವಿತ್ರಾಲಯವನ್ನು ಪ್ರವೇಶಿಸುವುದು ಮತ್ತು ಅಲ್ಲಿ ಆಜ್ಞಾವಿಧಿಗಳಲ್ಲಿ ಭಾಗವಹಿಸುವುದು ಪವಿತ್ರ ಸವಲತ್ತು. ಅಧಿಕೃತ ಯಾಜಕತ್ವದ ನಾಯಕರು ನಿರ್ಧರಿಸಿದಂತೆ, ಆಧ್ಯಾತ್ಮಿಕವಾಗಿ ಸಿದ್ಧರಾಗಿರುವ ಮತ್ತು ಕರ್ತನ ಮಾನದಂಡಗಳನ್ನು ಜೀವಿಸಲು ಶ್ರಮಿಸುವವರಿಗೆ ಈ ಸವಲತ್ತು ಕಾಯ್ದಿರಿಸಲಾಗಿದೆ.

ಈ ನಿರ್ಣಯವನ್ನು ಮಾಡಲು, ಯಾಜಕತ್ವದ ನಾಯಕರು ಕೆಳಗಿನ ಪ್ರಶ್ನೆಗಳನ್ನು ಬಳಸಿಕೊಂಡು ಸದಸ್ಯರನ್ನು ಸಂದರ್ಶಿಸುತ್ತಾರೆ.

ಪವಿತ್ರಾಲಯದ ಶಿಫಾರಸು ಸಂದರ್ಶನದ ಪ್ರಶ್ನೆಗಳು

  1. ನೀವು ನಿತ್ಯ ತಂದೆಯಾದ ದೇವರಲ್ಲಿ, ಅವರ ಮಗ, ಯೇಸುಕ್ರಿಸ್ತರು; ಮತ್ತು ಪವಿತ್ರಾತ್ಮನಲ್ಲಿ ವಿಶ್ವಾಸ ಮತ್ತು ಸಾಕ್ಷ್ಯವನ್ನು ಹೊಂದಿದ್ದೀರಾ?

  2. ಯೇಸುಕ್ರಿಸ್ತನ ಪ್ರಾಯಶ್ಚಿತ್ತ ಮತ್ತು ನಿಮ್ಮ ರಕ್ಷಕ ಮತ್ತು ವಿಮೋಚಕನ ಪಾತ್ರದ ಸಾಕ್ಷ್ಯವನ್ನು ನೀವು ಹೊಂದಿದ್ದೀರಾ?

  3. ಯೇಸುಕ್ರಿಸ್ತನ ಸುವಾರ್ತೆಯ ಪುನಃಸ್ಥಾಪನೆಯ ಸಾಕ್ಷ್ಯವನ್ನು ನೀವು ಹೊಂದಿದ್ದೀರಾ?

  4. ನೀವು ಯೇಸು ಕ್ರಿಸ್ತನ ಕಡೆ ದಿನಗಳ ಸಂತರ ಸಭೆ ಅಧ್ಯಕ್ಷರನ್ನು ಪ್ರವಾದಿ, ದಾರ್ಶನಿಕ ಮತ್ತು ಬಹಿರಂಗ ಪಡಿಸುವವರಾಗಿ ಮತ್ತು ಎಲ್ಲಾ ಯಾಜಕತ್ವದ ಕೀಲಿಗಳನ್ನು ಚಲಾಯಿಸಲು ಅಧಿಕಾರ ಹೊಂದಿರುವ ಭೂಮಿಯ ಮೇಲಿನ ಏಕೈಕ ವ್ಯಕ್ತಿಯಾಗಿ ಬೆಂಬಲಿಸುತ್ತೀರಾ?

    ನೀವು ಮೊದಲ ಅಧ್ಯಕ್ಷತೆಯ ಸದಸ್ಯರನ್ನು ಮತ್ತು ಹನ್ನೆರಡು ಅಪೊಸ್ತಲರ ಸಮಿತಿಯ ಸದಸ್ಯರನ್ನು ಪ್ರವಾದಿಗಳು, ದಾರ್ಶನಿಕರು ಮತ್ತು ಬಹಿರಂಗಪಡಿಸುವವರಂತೆ ಬೆಂಬಲಿಸುತ್ತೀರಾ?

    ನೀವು ಸಭೆಯ ಇತರ ಮುಖ್ಯ ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರನ್ನು ಬೆಂಬಲಿಸುತ್ತೀರಾ?

  5. ಕರ್ತನು ತನ್ನ ಮುಂದೆ ಎಲ್ಲವನ್ನೂ “ಶುಚಿತ್ವದಲ್ಲಿ” ಮಾಡಬೇಕೆಂದು ಹೇಳಿದ್ದಾರೆ (ಉಪದೇಶ ಮತ್ತು ಒಡಂಬಡಿಕೆಗಳು 42:41).

    ನಿಮ್ಮ ಆಲೋಚನೆಗಳು ಮತ್ತು ನಡವಳಿಕೆಯಲ್ಲಿ ನೀವು ನೈತಿಕ ಸ್ವಚ್ಛತೆಗಾಗಿ ಶ್ರಮಿಸುತ್ತೀರಾ?

    ನೀವು ಲ್ಯೆಂಗಿಕ ಪರಿಶುದ್ಧತೆಯ ಕಾನೂನನ್ನು ಪಾಲಿಸುತ್ತೀರಾ?

  6. ನಿಮ್ಮ ಕುಟುಂಬದ ಸದಸ್ಯರು ಮತ್ತು ಇತರರೊಂದಿಗೆ ನಿಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ನಡವಳಿಕೆಯಲ್ಲಿ ನೀವು ಯೇಸು ಕ್ರಿಸ್ತನ ಸಭೆ ಬೋಧನೆಗಳನ್ನು ಅನುಸರಿಸುತ್ತೀರಾ?

  7. ಯೇಸು ಕ್ರಿಸ್ತನ ಕಡೆ ದಿನಗಳ ಸಂತರ ಸಭೆ ವಿರುದ್ಧವಾದ ಯಾವುದೇ ಬೋಧನೆಗಳು, ಅಭ್ಯಾಸಗಳು ಅಥವಾ ಸಿದ್ಧಾಂತವನ್ನು ನೀವು ಬೆಂಬಲಿಸುತ್ತೀರಾ ಅಥವಾ ಪ್ರಚಾರ ಮಾಡುತ್ತೀರಾ?

  8. ನೀವು ಮನೆಯಲ್ಲಿ ಮತ್ತು ಸಭೆಯಲ್ಲಿ ಸಬ್ಬತ್ ದಿನವನ್ನು ಪವಿತ್ರವಾಗಿಡಲು ಶ್ರಮಿಸುತ್ತೀರಾ; ನಿಮ್ಮ ಸಭೆಗಳಿಗೆ ಹಾಜರಾಗುತ್ತೀರಾ; ಕರ್ತನ ಭೋಜನೆಗೆ ತಯಾರಾಗಿ ಮತ್ತು ಯೋಗ್ಯವಾಗಿ ಪಾಲ್ಗೊಳ್ಳುತ್ತೀರಾ; ಮತ್ತು ಸುವಾರ್ತೆಯ ಕಾನೂನುಗಳು ಮತ್ತು ಆಜ್ಞೆಗಳಿಗೆ ಅನುಗುಣವಾಗಿ ನಿಮ್ಮ ಜೀವನವನ್ನು ನಡೆಸುತ್ತೀರಾ?

  9. ನೀವು ಮಾಡುವ ಎಲ್ಲದರಲ್ಲೂ ಪ್ರಾಮಾಣಿಕವಾಗಿರಲು ನೀವು ಪ್ರಯತ್ನಿಸುತ್ತೀರಾ?

  10. ನೀವು ಪೂರ್ಣ ದಶಮಾಂಶ ಪಾವತಿಸುವವರಾ?

    ಹೊಸ ಸದಸ್ಯರಿಗೆ ಬದಲಿ ಪ್ರತಿನಿಧಿ ದೀಕ್ಷಾಸ್ನಾನ ಮತ್ತು ದೃಢೀಕರಣಗಳನ್ನು ಮಾಡಲು ಶಿಫಾರಸು ಮಾಡಲು: ದಶಮಾಂಶವನ್ನು ಪಾವತಿಸಲು ನೀವು ಆಜ್ಞೆಯನ್ನು ಪಾಲಿಸಲು ಸಿದ್ಧರಿದ್ದೀರಾ?

  11. ನೀವು ವಿವೇಕದ ನುಡಿಯನ್ನು ಅರ್ಥಮಾಡಿಕೊಳ್ಳುತ್ತೀರಾ ಮತ್ತು ಪಾಲಿಸುತ್ತೀರಾ?

  12. (ಮಗು ಅಥವಾ ಯುವಕರನ್ನು ಸಂದರ್ಶಿಸುವಾಗ ಈ ಪ್ರಶ್ನೆಯನ್ನು ಬಿಟ್ಟುಬಿಡಲಾಗಿದೆ.) ನೀವು ಮಾಜಿ ಸಂಗಾತಿಗೆ ಅಥವಾ ಮಕ್ಕಳಿಗೆ ಯಾವುದೇ ಹಣಕಾಸಿನ ಅಥವಾ ಇತರ ಬಾಧ್ಯತೆಗಳನ್ನು ಹೊಂದಿದ್ದೀರಾ?

    ಹೌದು ಎಂದಾದರೆ, ಆ ಬಾಧ್ಯತೆಗಳನ್ನು ಪೂರೈಸುವಲ್ಲಿ ನೀವು ಪ್ರಸ್ತುತವಾಗಿದ್ದೀರಾ?

  13. (ಪವಿತ್ರದಾನ ಆಶೀರ್ವಾದ ಹೊಂದಿರದ ಸದಸ್ಯರನ್ನು ಸಂದರ್ಶಿಸುವಾಗ ಈ ಪ್ರಶ್ನೆಯನ್ನು ಬಿಟ್ಟುಬಿಡಲಾಗಿದೆ.) ನೀವು ಪವಿತ್ರಾಲಯದಲ್ಲಿ ಮಾಡಿದ ಒಪ್ಪಂದಗಳನ್ನು ಪಾಲಿಸುತ್ತೀರಾ?

  14. (ಪವಿತ್ರದಾನ ಹೊಂದಿರದ ಸದಸ್ಯರನ್ನು ಸಂದರ್ಶಿಸುವಾಗ ಈ ಪ್ರಶ್ನೆಯನ್ನು ಬಿಟ್ಟುಬಿಡಲಾಗಿದೆ.) ಪೂರ್ವಸಿದ್ಧತೆಯ ಆಜ್ಞಾವಿಧಿಗಳಲ್ಲಿ ಸೂಚಿಸಿದಂತೆ ಉಡುಪನ್ನು ಧರಿಸಲು ನಿಮ್ಮ ಪವಿತ್ರ ಉಡುಪನ್ನು ನೀವು ಗೌರವಿಸುತ್ತೀರಾ? (ಕೆಳಗೆ ಸೇರಿಸಲಾದ “ಪವಿತ್ರಾಲಯದ ಉಡುಪನ್ನು ಧರಿಸುವುದು” ಹೇಳಿಕೆಯನ್ನು ಪ್ರತಿಯೊಬ್ಬ ಸದಸ್ಯರಿಗೆ ಓದಿ.)

  15. ನಿಮ್ಮ ಪಶ್ಚಾತ್ತಾಪದ ಭಾಗವಾಗಿ ಯಾಜಕತ್ವದ ಅಧಿಕಾರಿಗಳೊಂದಿಗೆ ಪರಿಹರಿಸಬೇಕಾದ ಗಹನವಾದ ಪಾಪಗಳು ನಿಮ್ಮ ಜೀವನದಲ್ಲಿ ಇವೆಯೇ?

  16. ಕರ್ತನ ಆಲಯಕ್ಕೆ ಪ್ರವೇಶಿಸಲು ಮತ್ತು ಪವಿತ್ರಾಲಯದ ಆಜ್ಞಾವಿಧಿಗಳಲ್ಲಿ ಭಾಗವಹಿಸಲು ನೀವು ಅರ್ಹರೆಂದು ಪರಿಗಣಿಸುತ್ತೀರಾ?

ಪವಿತ್ರಾಲಯದ ಉಡುಪನ್ನು ಧರಿಸುವುದು

ಮೊದಲ ಅಧ್ಯಕ್ಷತೆಯು ಉಡುಪನ್ನು ಧರಿಸುವುದರ ಕುರಿತು ಕೆಳಗಿನ ಮಾರ್ಗದರ್ಶನವನ್ನು ಒದಗಿಸಿದ್ದಾರೆ:

“ಪವಿತ್ರ ಯಾಜಕತ್ವದ ಉಡುಪು ಪವಿತ್ರಾಲಯದಲ್ಲಿನ ಮುಸುಕನ್ನು ನಮಗೆ ನೆನಪಿಸುತ್ತದೆ ಮತ್ತು ಆ ಮುಸುಕು ಯೇಸುಕ್ರಿಸ್ತರ ಸಂಕೇತವಾಗಿದೆ. ನೀವು ನಿಮ್ಮ ಉಡುಪನ್ನು ಧರಿಸಿದಾಗ, ನೀವು ಯೇಸುಕ್ರಿಸ್ತರ ಪವಿತ್ರ ಚಿಹ್ನೆಯನ್ನು ಹಾಕುತ್ತೀರಿ. ಅದನ್ನು ಧರಿಸುವುದು ಆತನನ್ನು ಅನುಸರಿಸುವ ನಿಮ್ಮ ಆಂತರಿಕ ಬದ್ಧತೆಯ ಬಾಹ್ಯ ಅಭಿವ್ಯಕ್ತಿಯಾಗಿದೆ. ಉಡುಪನ್ನು ನಿಮ್ಮ ಪವಿತ್ರಾಲಯದ ಒಡಂಬಡಿಕೆಗಳ ಜ್ಞಾಪನೆಯಾಗಿದೆ. ನಿಮ್ಮ ಜೀವನದುದ್ದಕ್ಕೂ ನೀವು ಹಗಲು ರಾತ್ರಿ ಉಡುಪನ್ನು ಧರಿಸಬೇಕು. ಉಡುಪನ್ನು ಧರಿಸುವಾಗ ಸಮಂಜಸವಾಗಿ ಮಾಡಲಾಗದ ಚಟುವಟಿಕೆಗಳಿಗಾಗಿ ಅದನ್ನು ತೆಗೆದುಹಾಕಬೇಕಾದಾಗ, ಸಾಧ್ಯವಾದಷ್ಟು ಬೇಗ ಅದನ್ನು ಪುನಃಸ್ಥಾಪಿಸಲು ಪ್ರಯತ್ನಿಸಿ. ಪೂರ್ವಸಿದ್ಧತೆಯ ಆಜ್ಞಾವಿಧಿಗಳಲ್ಲಿ ಸೂಚಿಸಿದಂತೆ ಉಡುಪನ್ನು ಧರಿಸುವ ಪವಿತ್ರ ಸವಲತ್ತು ಸೇರಿದಂತೆ ನಿಮ್ಮ ಒಡಂಬಡಿಕೆಗಳನ್ನು ನೀವು ಉಳಿಸಿಕೊಳ್ಳುವಾಗ, ನೀವು ರಕ್ಷಕನ ಕರುಣೆ, ರಕ್ಷಣೆ, ಬಲ ಮತ್ತು ಶಕ್ತಿಗೆ ಹೆಚ್ಚಿನ ಪ್ರವೇಶವನ್ನು ಹೊಂದಿರುತ್ತೀರಿ.”

ಹೆಚ್ಚುವರಿ ನಿರ್ದೇಶನ

ಯಾಜಕತ್ವದ ನಾಯಕನು ಸದಸ್ಯನಿಗೆ ಅವನ ಅಥವಾ ಅವಳ ಶಿಫಾರಸನ್ನು ಕಾಪಾಡುವ ಅಗತ್ಯವನ್ನು ಒತ್ತಿಹೇಳುತ್ತಾರೆ. ಅದನ್ನು ಎಂದಿಗೂ ಸಾಲವಾಗಿ ನೀಡಬಾರದು ಮತ್ತು ಕಳೆದುಹೋದರೆ ಅಥವಾ ಕಳ್ಳತನವಾದರೆ ವಿತರಕರಿಗೆ ತಕ್ಷಣವೇ ವರದಿ ಮಾಡಬೇಕು.